
21st June 2025
ಬೆಳಗಾವಿ ದಿ 21:-ಇಂದು ಮಧ್ಯಾಹ್ನ ಬೆಳಗಾವಿ ನಗರದ ರಾಮದೇವ ಹೋಟೆಲ್ ದ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಬೆಳಗಾವಿ ಜಿಲ್ಲಾ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ಅಧ್ಯಕ್ಷರಾದ ಪ್ರಾಥಮಿಕ ಶಾಲಾ ಹಿರಿಯ ಮುಖ್ಯ್ಯೊಪಾದ್ಯಾಯರಾದ ಶ್ರೀ ಬಸವರಾಜ ಫಕೀರಪ್ಪ ಸುಣಗಾರ ರವರನ್ನು ಪಬ್ಲಿಕ್ ಟಿವಿ ಯ ಜಿಲ್ಲಾ ಮುಖ್ಯ ವರದಿಗಾರರಾದ ಶ್ರೀ ದಿಲೀಪಕುಮಾರ ಕುರಂದೆವಾಡೆ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿ ಅವರ ಸಾಮಾಜಿಕ ಶೈಕ್ಷಣಿಕ ಕಾರ್ಯಗಳಿಗೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಸಿದ್ದಗೌಡ ಸುಣಗಾರ, ಹಿರಿಯ ವಕೀಲರಾದ ಶ್ರೀ ಸಂಜಯ ಪಾಟೀಲರು, ಮಾಜಿ ಮಹಾಪೌರರಾದ ಶ್ರೀ ಅಪ್ಪಾಸಾಬ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾದ ಶ್ರೀ ಮಲ್ಲಪ್ಪಣ್ಣ ಮುರಗೋಡ ರವರ, ಮಾಜಿ ಉಪತಹಸೀಲ್ದಾರರಾದ ಶ್ರೀ ಎಸ್ ಸಿ ಗಂಗಾಪುರ ರವರು, ಶ್ರೀ ಜೀವನ ಶಿರಗೆ ಯವರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಶ್ರೀ ಬಸವರಾಜ ಸುಣಗಾರ ರನ್ನು ಅಭಿನಂದಿಸಿದರು
ಬಸವರಾಜ ಸುಣಗಾರ ರವರು ಸಾಹಿತಿಗಳು ಸಂಘಟಕರು ಆಗಿದ್ದು, ಹಲವಾರು ಸಂಘ ಗಳಲ್ಲಿ ಕಾರ್ಯ ಮಾಡಿದ್ದು, ಸದ್ಯ ಕರ್ನಾಟಕ ರಾಜ್ಯ ಗಂಗಾಮತಸ್ಥ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯದ ಉಪಾಧ್ಯಕ್ಷರಾಗಿರುವರು,ಸದ್ಯ ಹೊಸ ಕಾರ್ಯದಲ್ಲಿ ಯಶಸ್ಸು ಗಳಿಸಲೆಂದು ಗೆಳೆಯರ ಬಳಗ ಹಾರೈಸಿ ಅಭಿನಂದಿಸಿದೆ
ಧನ್ಯವಾದಗಳು :-ಕಾರ್ಯಕ್ರಮ ಆಯೋಜನೆ ಮಾಡಿರುವ ಆತ್ಮೀಯರು, ಪಬ್ಲಿಕ್ ಟಿವಿ ಯ ಮುಖ್ಯ ವರದಿಗಾರರಾದ ಶ್ರೀ ದಿಲೀಪಕುಮಾರ ಕುರಂದೆವಾಡೆಯವರಿಗೆ ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ ಸಂಗಮೇಶ ಖನ್ನಿನಾಯ್ಕರಿಗೆ ಧನ್ಯವಾದಗಳನ್ನು ಬಸವರಾಜ ಫಕೀರಪ್ಪ ಸುಣಗಾರ ರವರು ಧನ್ಯವಾದಗಳನ್ನು ಹೇಳಿದ್ದಾರೆ
ಶ್ರೀಮತಿ ತಂಗವ್ವ ನಂದಪ್ಪ ಬಾಗೇವಾಡಿ ಇವರ ಶತಮಾನೋತ್ಸವದ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಸಮಾರಂಭ
ಬೈಲಹೊಂಗಲದಲ್ಲಿ ಮಲಪ್ರಭಾ ಹಾಸ್ಪಿಟಲ್ ಉದ್ಘಾಟನೆ ನೂತನ ಆಸ್ಪತ್ರೆಯಿಂದ ಜನರ ಆರೋಗ್ಯ ಸಮಸ್ಯೆ ದೂರವಾಗಲಿ - ಡಾ.ಶಿವಾನಂದ ಭಾರತಿ ಸ್ವಾಮಿಜಿ
ಕನ್ನಡದ ಹೆಸರಾಂತ ಕಲಾವಿದ ರಂಗಕರ್ಮಿ ಕನ್ನಡಪರ ಹೋರಾಟಗಾರ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ ವಿ ನಾಗರಾಜ ಮೂರ್ತಿ ಹಾಗೂ ಪ್ರಿಯಾಂಕ ಮಾಸಪತ್ರಿಕೆ ಎಕ್ಸಿಕ್ಯೂಟಿವ್ ಸಂಪಾದಕಿ ಎಸ್. ಜಿ. ತುಂಗಾ ರೇಣುಕಾ ದಂಪತಿಗಳಿಂದ ಮುಂಜಾನೆ ಬೆಳಕು